ಮಂಗಳೂರು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಬರುವ ಒಂದು ಸುಂದರ ನಗರ. ಸಮುದ್ರದ ಸೌಂದರ್ಯಕ್ಕೆ ಹೆಸರಾಗಿ ನಿಂತಿರುವ ಈ ಸ್ಥಳವು ಬೇಸಿಗೆ ಕಾಲದಲ್ಲೂ ಮನೋಹರವಾದ ಸಮುದ್ರ, ದೇವಸ್ಥಾನಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನೀವು ಮಂಗಳೂರಿಗೆ ಬಂದಾಗ ಮಿಸ್ ಮಾಡದೇ ನೋಡಬೇಕಾದ ಕೆಲವು ಸ್ಥಳಗಳ ಕುರಿತು ತಿಳಿದುಕೊಳ್ಳೋಣ.
ಪಣಂಬೂರು ಬೀಚ್:
ಮಂಗಳೂರಿನ ಪ್ರಸಿದ್ಧವಾದ ಬೀಚ್. ಇಲ್ಲಿ ಸ್ಪೋರ್ಟ್ ಆಕ್ಟಿವಿಟಿ, ಸೂರ್ಯೋದಯ-ಸೂರ್ಯಾಸ್ತಮಾನದ ದೃಶ್ಯಗಳು ಕಣ್ಣಿಗೆ ಹಬ್ಬ ನೀಡುತ್ತದೆ.
ತಣ್ಣೀರುಬಾವಿ ಬೀಚ್:
ಹೆಚ್ಚು ಜನಸಂದಣಿ ಇಲ್ಲದ ಶಾಂತ ತೀರ ಪ್ರದೇಶ. ಇಲ್ಲಿ ಬೋಟ್ ಮೂಲಕವೂ ಹೋಗಬಹುದು. ತಂಪಾದ ಗಾಳಿಯ ಅನುಭವಕ್ಕೆ ಇದು ಬೆಸ್ಟ್ ಪ್ಲೇಸ್ .
ಕದ್ರಿ ಮಂಜುನಾಥ ದೇವಸ್ಥಾನ:
ಇದು 10ನೇ ಶತಮಾನದಿಂದ ಇರುವ ಪುರಾತನ ದೇವಾಲಯ. ಇಲ್ಲಿನ ಕಲ್ಲಿನ ಶಿಲ್ಪಿ ಕಲೆ ಮತ್ತು ದೇವಸ್ಥಾನದ ಶಾಂತ ವಾತಾವರಣ ಶ್ರದ್ಧಾಳುಗಳಿಗೆ ಆಕರ್ಷಣೆಯಾಗಿದೆ.
ಪಿಲಿಕುಳ ನಿಸರ್ಗಧಾಮ
ಪ್ರಕೃತಿ ಪ್ರಿಯರಿಗೆ ಪಾರ್ಕ್, ಮೃಗಾಲಯ (zoo), ಬೋಟಿಂಗ್, ತೋಟಗಳು, ವಿಜ್ಞಾನ ಕೇಂದ್ರ ಇರುವ ಒಂದು ಸಂಪೂರ್ಣವಾದ ಪ್ರವಾಸಿ ಸ್ಥಳವಾಗಿದೆ.
ಸುರತ್ಕಲ್ ಲೈಟ್ ಹೌಸ್ ಮತ್ತು ಬೀಚ್
ಸುರತ್ಕಲ್ ಲೈಟ್ ಹೌಸ್ ಮೇಲಿನಿಂದ ಸಮುದ್ರದ ಸುಂದರ ದೃಶ್ಯವನ್ನು ನೋಡುವುದು ಕಣ್ಣಿಗೆ ಹಬ್ಬ. ಜೊತೆಗೆ ಸಮೀಪದ ಸುರತ್ಕಲ್ ಬೀಚ್ ಶಾಂತ ಮತ್ತು ಸ್ವಚ್ಛವಾಗಿದ್ದು, ಸಂಜೆ ವಾಕಿಂಗ್ ಮಾಡೋರಿಗೆ ಉತ್ತಮ ಸ್ಥಳ.
ಸೇಂಟ್ ಆಲೋಶಿಯಸ್ ಚರ್ಚ್
ವಿಶ್ವಪ್ರಸಿದ್ಧ ಚಿತ್ರಕಲೆಯಿಂದ ಅಲಂಕರಿಸಲಾದ ಈ ಚರ್ಚ್, ತನ್ನ ಅಂದದ ಒಳಾಂಗಣ ಚಿತ್ರಗಳು ಮತ್ತು ಪ್ರಶಾಂತ ವಾತಾವರಣದಿಂದ ಮೆಚ್ಚುಗೆ ಗಳಿಸಿದೆ. ಇಲ್ಲಿಗೆ ಹೋದರೆ ಮನಸ್ಸಿಗೆ ಶಾಂತಿ ಸಿಗೋದು ಖಂಡಿತ.