ತ್ರಿಕೋನ ಪ್ರೇಮ್ ಕಹಾನಿ: ರಸ್ತೆಯಲ್ಲೇ ಪ್ರೇಮಿಗಳಿಗೆ ಚಾಕು ಇರಿತ

ಹೊಸದಿಗಂತ ವರದಿ,ಕುಶಾಲನಗರ:

ತಾನು ಪ್ರೀತಿಸುತ್ತಿದ್ದ ಹುಡುಗಿ ಬೇರೊಬ್ಬನೊಂದಿಗೆ ಪ್ರವಾಸಿತಾಣದಲ್ಲಿ ಅಡ್ಡಾಡುತ್ತಿರುವ ಕಂಡ ಪ್ರಿಯಕರ ಇಬ್ಬರಿಗೂ ಚಾಕುವಿನಿಂದ ಹಲ್ಲೆ‌ ಮಾಡಿದ ಘಟನೆ ಕುಶಾಲನಗರದ ಕಾವೇರಿ‌ ನಿಸರ್ಗಧಾಮದಲ್ಲಿ ಶನಿವಾರ ನಡೆದಿದೆ.
ಕುಶಾಲನಗರ ಸರಕಾರಿ ಪ್ರಥಮ‌ ದರ್ಜೆ‌ ಕಾಲೇಜಿನ ವಿದ್ಯಾರ್ಥಿಗಳಾದ ಜೋಡಿ ಕಾವೇರಿ‌ ನಿಸರ್ಗಧಾಮಕ್ಕೆ ತೆರಳಿದೆ. ಈ ಪೈಕಿ ಮಾದಾಪಟ್ಟಣ ನಿವಾಸಿ ವಿದ್ಯಾರ್ಥಿನಿ ಪ್ರಿಯಕರ ಎನ್ನಲಾದ ಕುಶಾಲನಗರ ಹೋಟೆಲ್ ಸಿಬ್ಬಂದಿ ದೊಡ್ಡಹರವೆ ಗ್ರಾಮದ ವಿಜಯ್ (22) ಈ ಜೋಡಿಯನ್ನು ಹಿಂಬಾಲಿಸಿ ಚಾಕುವಿನಿಂದ ಇರಿಯಲು‌ ಮುಂದಾಗಿದ್ದಾನೆ. ಘಟನೆಯಿಂದ ಯುವತಿಯ ಭುಜ, ಕೈ, ಕುತ್ತಿಗೆ ಭಾಗದಲ್ಲಿ ಗಾಯ ಉಂಟಾಗಿದೆ. ತಡೆಯಲು ಬಂದ ಈಕೆಯ ಸಹಚರ ಹೆಬ್ಬಾಲೆಯ ಪ್ರವೀಣ್ ಎಂಬಾತನಿಗೂ‌ಕೂಡ ಎರಡು ಕೈಗಳಿಗೆ ಗಾಯ ಉಂಟಾಗಿದೆ. ಸ್ಥಳದಲ್ಲಿ ಇದ್ದ ಇತರೆ ಪ್ರವಾಸಿಗರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸಕಾಲದಲ್ಲಿ‌ ಮದ್ಯ ಪ್ರವೇಶಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!