ಉದಯಪುರ ಹಿಂದು ಹತ್ಯೆ: ಗುಂಡಾಗಳನ್ನು ಗುಂಡಿಟ್ಟು ಸಾಯಿಸುವ ಕಾನೂನು ಜಾರಿಗೆ ಈಶ್ವರಪ್ಪ ಆಗ್ರಹ

ಹೊಸದಿಗಂತ ವರದಿ,ಶಿವಮೊಗ್ಗ:

ಹಿಂದೂಗಳನ್ನು ಹೇಡಿಗಳಂತೆ ಕಗ್ಗೊಲೆ ಮಾಡುವ ಮುಸ್ಲಿಂ ಗುಂಡಾಗಳಿಗೆ ತಕ್ಷಣ ನೇಣು ಹಾಕುವ ಅಥವಾ ಗುಂಡಿಟ್ಟು ಸಾಯಿಸುವ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಅವರ ಕುತ್ತಿಗೆ ಸೀಳಿ ಕೊಲೆ ಮಾಡಿರುವುದು ಖಂಡಿಸಿ ಬಿಜೆಪಿ ನಗರ ಯುವಮೋರ್ಚಾ ವತಿಯಿಂದ ಶಿವಪ್ಪನಾಯಕ ಪ್ರತಿಮೆ ಬಳಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರದ್ರೋಹಿ ಚಟುವಟಿಕೆಗಳನ್ನು ನಡೆಸುವ ಗುಂಡಾಗಳಿಗೆ ಶಿಕ್ಷೆ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಟೈಲರ್ ಒಬ್ಬರೇ ಇದ್ದಾಗ ಕೊಲೆ ಮಾಡಿರುವ ಕೊಲೆಗಡುಕರು ತಮ್ಮ ಗಂಡಸುತನ ತೋರಿಸಿಕೊಂಡಿದ್ದಾರೆ. ಈಗಾಗಲೇ ಅವರನ್ನು ಬಂಧಿಸಲಾಗಿದೆ. ಆರೋಪಿಗಳೇ ಬಹಿರಂಗವಾಗಿ ಕೊಲೆ ಮಾಡಿರುವುದನ್ನು ಹೇಳಿಕೊಂಡಿದ್ದಾರೆ. ಹಾಗಾಗಿ ಇನ್ನು ತನಿಖೆ ಮಾಡುವುದು ಏನು ಉಳಿದಿದೆ? ಅವರನ್ನು ಗುಂಡಿಟ್ಟು ಕೊಂದು ಹಾಕಿದರೆ ಪ್ಪೇನು ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!