ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಸಮೀಪದ ಹೊಟೇಲೊಂದಕ್ಕೆ ತೆರಳಿದ ಗ್ರಾಹಕರಿಗೆ ಅಚ್ಚರಿಯ ದೃಶ್ಯವೊಂದು ಸ್ವಾಗತಿಸಿದ ಬೆಳವಣಿಗೆ ನಡೆಯಿತು.
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಖುದ್ದು ಆ ಹೊಟೇಲ್ನಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸುತ್ತಿದ್ದ ದೃಶ್ಯ ಎಲ್ಲರನ್ನೂ ಅಲ್ಲಿ ಅಚ್ಚರಿಗೀಡುಮಾಡಿತ್ತು. ಹೊಟೇಲ್ನಲ್ಲಿ ಕರಾವಳಿಯ ಪ್ರಸಿದ್ಧ ಬನ್ಸ್ ಸವಿದ ಅವರು ಕೆಲಕಾಲ ಸ್ಥಳೀಯರೊಂದಿಗೆ ಕುಶಲೋಪರಿ ನಡೆಸಿ ಬಳಿಕ ಅಲ್ಲಿಂದ ತೆರಳಿದರು.
ಈ ಸಂಗತಿಯನ್ನು ಅವರು ತಮ್ಮ ಟ್ವಿಟರ್ನಲ್ಲಿಯೂ ಹಂಚಿಕೊಂಡಿದ್ದು, ವಿವಿಧ ಕಾರ್ಯಕ್ರಮಗಳ ನಿಮಿತ್ತ ಇಂದು ಉಡುಪಿಗೆ ಆಗಮಿಸಿದ ವೇಳೆ ದಾರಿ ಮಧ್ಯೆ ಮಯೂರ ಹೋಟೆಲ್ ಒಂದರಲ್ಲಿ ಮಂಗಳೂರು ಬನ್ಸ್ ಸವಿದೆ. ಈ ಭಾಗದ ವಿಶೇಷ ತಿನಿಸುಗಳಾದ ಬನ್ಸ್, ಗೋಳಿ ಬಜೆ, ನೀರ್ ದೋಸೆಗಳನ್ನು ಸವಿಯದಿದ್ದರೆ ಕರಾವಳಿ ಜಿಲ್ಲೆಗಳ ಪ್ರವಾಸ ಪೂರ್ಣವಾಗದು ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ