ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತಿಯ ಸಾವಿನಿಂದ ಡಿಪ್ರೆಶನ್ಗೆ ಶರಣಾಗಿದ್ದ ಮಹಿಳೆಯೊಬರು ತಮ್ಮ ಎರಡು ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರದ ಮುಳಬಾಗಿಲಿನಲ್ಲಿ ನಡೆದಿದೆ.
ಆಲಂಗೂರು ಗ್ರಾಮದ ಆಂಧ್ರ ಮೂಲದ ಬುಜ್ಜಮ್ಮನಿಗೆ ಬರೀ 22 ವರ್ಷ. ಪತಿಯನ್ನು ಕಳೆದುಕೊಂಡ ನೋವಿನಲ್ಲಿ ಖಿನ್ನತೆಗೆ ಜಾರಿದ್ದ ಬುಜ್ಜಮ್ಮ ತನ್ನ ಮೂರು ಹಾಗೂ ಒಂದು ವರ್ಷದ ಕೂಸನ್ನು ಕೊಂದಿದ್ದಾರೆ.
ಮೂರು ವರ್ಷದ ಸರಸ್ವತಿ ಹಾಗೂ ಒಂದು ವರ್ಷದ ಹೇಮಾಶ್ರೀ ಮೃತರು. ಎರಡು ಮಕ್ಕಳನ್ನು ಕುತ್ತಿಗೆ ಹಿಸುಕಿ ಕೊಂದ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಸ್ಥಳೀಯರು ಬುಜ್ಜಮ್ಮನನ್ನು ರಕ್ಷಿಸಿದ್ದಾರೆ.
ವಿನಾಯಕಬಾಬು ಹಾಗೂ ಬುಜ್ಜಮ್ಮ ಅನ್ಯೂನ್ಯವಾಗಿ ಸಂಸಾರ ನಡೆಸುತ್ತಿದ್ದರು. ಇಬ್ಬರೂ ಮಾವಿನ ತೋಪೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಪ್ಪತ್ತು ದಿನಗಳ ಹಿಒಂದೆ ವಿನಾಯಕಬಾಬು ಅಪಘಾತದಲ್ಲಿ ಮತಪಟ್ಟಿದ್ದರು.



