ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ನಿನ್ನೆ ತಡರಾತ್ರಿ ನೊವಾಟೆಲ್ ಹೋಟೆಲ್ನಲ್ಲಿ ಭೇಟಿಯಾದರು. ಇಬ್ಬರೂ ಒಟ್ಟಿಗೆ ಊಟ ಸವಿದ ಬಳಿಕ ನೊವಾಟೆಲ್ ಹೋಟೆಲ್ನಲ್ಲಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ರು. ಬಿಜೆಪಿಯ ಉನ್ನತ ನಾಯಕನೊಂದಿಗಿನ ಎನ್ಟಿಆರ್ ಭೇಟಿ ಕುತೂಹಲಕಾರಿಯಾಗಿದೆ. ಅಮಿತ್ ಶಾ ಮತ್ತು ಜೂನಿಯರ್ ಎನ್ ಟಿಆರ್ ಯಾವ್ಯಾವ ವಿಷಯಗಳ ಚರ್ಚೆ ನಡೆಸಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇದು ರಾಜಕೀಯ ಸಭೆಯಲ್ಲ ಎನ್ನುತ್ತಿವೆ ಬಿಜೆಪಿ ಮೂಲಗಳು.
ತೆಲಂಗಾಣದಲ್ಲಿ ಬಲಿಷ್ಠವಾಗಲು ಹವಣಿಸುತ್ತಿರುವ ಬಿಜೆಪಿ, ಸಿನಿಮಾದ ಗ್ಲಾಮರ್ ಬಳಸಿಕೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಜೂನಿಯರ್ ಎನ್ಟಿಆರ್ ಅವರನ್ನು ಎಳೆಯುವ ಕಾರ್ಯತಂತ್ರ ರೂಪಿಸಿದೆ ಎನ್ನಲಾಗುತ್ತಿದೆ. ಮುಂಬರುವ ತೆಲಂಗಾಣ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲೇಬೇಕೆಂಬ ಛಲದಲ್ಲಿದೆ. ಈ ಕ್ರಮದಲ್ಲಿ ರಾಜಕೀಯ ಬಲದ ಜತೆಗೆ ಸಿನಿಮಾದರನ್ನು ಬಳಸಿಕೊಳ್ಳಲು ಬಿಜೆಪಿ ಪ್ಲಾನ್ ಸಿದ್ಧಪಡಿಸಿರುವಂತಿದೆ.
ಜೂನಿಯರ್ ಎನ್ಟಿಆರ್ ಜೊತೆಗಿನ ಔತಣಕೂಟದಲ್ಲಿ ಹಲವು ರಾಜಕೀಯ ವಿಚಾರಗಳನ್ನು ಅಮಿತ್ ಶಾ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಅಮಿತ್ ಶಾ, ಜೂನಿಯರ್ ಎನ್.ಟಿ.ಆರ್ ಹಾಗೂ ರಾಮೋಜಿ ರಾವ್ ಅವರನ್ನು ಭೇಟಿ ಮಾಡಿದ್ದು ಕುತೂಹಲಕಾರಿ ಅಂಶ. ಒಂದು ಸಮುದಾಯದ ಮತದಾರರ ಮೇಲೆ ಪ್ರಭಾವ ಬೀರುವಲ್ಲಿ ರಾಮೋಜಿ ರಾವ್ ಮತ್ತು ಜೂನಿಯರ್ ಎನ್ಟಿಆರ್ ನಿರ್ಣಾಯಕರಾಗಿದ್ದಾರೆ.
ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಅಮಿತ್ ಶಾ ಮತ್ತು ಜೂನಿಯರ್ ಎನ್ ಟಿಆರ್ ಭೇಟಿ ಕುರಿತು ಪ್ರತಿಕ್ರಿಯಿಸಿದ್ದು, ಇದು ಅವರ ವೈಯಕ್ತಿಕ ಅಜೆಂಡಾವಾಗಿದ್ದು, ಸಭೆಯಲ್ಲಿ ಯಾವುದೇ ರಾಜಕೀಯ ವಿಚಾಋ ಚರ್ಚೆ ನಡೆಸಿಲ್ಲ ಎಂದು ಬಂಡಿ ಸಂಜಯ್ ಹೇಳಿದ್ದಾರೆ. ಇಬ್ಬರ ಭೇಟಿ ಬಳಿಕ ಅತ್ಯಂತ ಉತ್ತಮ ನಟನನ್ನು ಭೇಟಿ ಮಾಡಿದ್ದ ಸಂತೋಷವಾಗಿದೆ ಎಂದು ಅಮಿತ್ ಶಾ ಟ್ವೀಟ್ ಕೂಡ ಮಾಡಿದ್ದಾರೆ.
Had a good interaction with a very talented actor and the gem of our Telugu cinema, Jr NTR in Hyderabad.
అత్యంత ప్రతిభావంతుడైన నటుడు మరియు మన తెలుగు సినిమా తారక రత్నం అయిన జూనియర్ ఎన్టీఆర్తో ఈ రోజు హైదరాబాద్లో కలిసి మాట్లాడటం చాలా ఆనందంగా అనిపించింది.@tarak9999 pic.twitter.com/FyXuXCM0bZ
— Amit Shah (@AmitShah) August 21, 2022