July 21, 2026
Tuesday, July 21, 2026
spot_img

ಜಮ್ಮು – ಕಾಶ್ಮೀರದ ವೈಷ್ಣೋ ದೇವಿ ಯಾತ್ರೆ ನಾಳೆಯಿಂದ ಮತ್ತೆ ಪುನರಾರಂಭ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ಯಾತ್ರೆ ಸೆಪ್ಟೆಂಬರ್ 17ರಂದು (ಬುಧವಾರ) ಪುನರಾರಂಭಗೊಳ್ಳಲಿದೆ. ವೈಷ್ಣೋದೇವಿ ಯಾತ್ರೆಯ ಪುನರಾರಂಭವು ಅನುಕೂಲಕರ ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ ಎಂದು ದೇವಾಲಯ ಮಂಡಳಿ ತಿಳಿಸಿದೆ.

ಆಗಸ್ಟ್ 26ರಂದು ತೀರ್ಥಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಕೆಲವೇ ಗಂಟೆಗಳ ಮೊದಲು ಸಂಭವಿಸಿದ ದೊಡ್ಡ ಭೂಕುಸಿತದಿಂದಾಗಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಅಡಚಣೆಯಾಯಿತು.ಈ ಭೀಕರ ಭೂಕುಸಿತದಲ್ಲಿ 34 ಯಾತ್ರಿಕರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದರು. ಹೀಗಾಗಿ, ಸುರಕ್ಷತಾ ಕಾರಣಗಳಿಗಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.

ಈ ಹಿಂದೆ, ದೇವಾಲಯ ಮಂಡಳಿಯು ಸೆಪ್ಟೆಂಬರ್ 14ರಂದು ಯಾತ್ರೆಯನ್ನು ಪುನರಾರಂಭಿಸಲು ಯೋಜಿಸಿತ್ತು. ಆದರೆ, ಮಾರ್ಗದಲ್ಲಿ ಮತ್ತು ಗರ್ಭಗುಡಿಯಲ್ಲಿ ನಿರಂತರ ಮಳೆ ಸುರಿದ ಕಾರಣ ಸುರಕ್ಷತಾ ಕಾಳಜಿ ಉಂಟಾಗಿ, ಮಂಡಳಿಯು ಯಾತ್ರೆಯ ಆರಂಭದ ಅವಧಿಯನ್ನು ವಿಸ್ತರಿಸಬೇಕಾಯಿತು. ಈ ನಿರ್ಧಾರವು ಯಾತ್ರೆಯನ್ನು ಪುನರಾರಂಭಿಸಲು ಉತ್ಸುಕರಾಗಿದ್ದ ಕೆಲವು ಭಕ್ತರಿಂದ ಪ್ರತಿಭಟನೆಗೆ ಕಾರಣವಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !