ವರಾಹ ರೂಪಂ ಹಾಡಿನ ವಿವಾದ: ಮಲಯಾಳಂ ನಟ ಪೃಥ್ವಿರಾಜ್​​​ ಮೇಲಿನ ಎಫ್​ಐಆರ್​ಗೆ ಹೈಕೋರ್ಟ್​ ತಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಷಬ್​ ಶೆಟ್ಟಿ ನಿರ್ದೇಶನದ ‘ಕಾಂತಾರ’ (Kantara Movie)ಅಬ್ಬರಿಸಿದ್ದು, ಇದರ ನಡುವೆ ಒಂದಷ್ಟು ವಿವಾದಗಳು ಕೂಡ ಸುತ್ತಿಕೊಂಡವು. ಚಿತ್ರ ‘ವರಾಹ ರೂಪಂ..’ (Varaha Roopam) ಹಾಡಿನ ಕುರಿತು ಕೃತಿ ಚೌರ್ಯದ ಆರೋಪ ಎದುರಾಗಿತ್ತು.

ಅಷ್ಟೇ ಅಲ್ಲದೇ ಆ ಪ್ರಕರಣ ಕೋರ್ಟ್​ ಮೆಟ್ಟಿಲೇರಿತ. ಈ ಕೇಸ್​ನಲ್ಲಿ ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್​ (Prithviraj Sukumaran)​ ಕೂಡ ಸಮಸ್ಯೆ ಎದುರಿಸುವಂತಾಗಿದ್ದು ಅಚ್ಚರಿ. ಆದರೆ ಅವರಿಗೆ ಈಗ ರಿಲೀಫ್​ ಸಿಕ್ಕಿದೆ. ಅವರ ಮೇಲಿದ್ದ ಎಫ್​ಐಆರ್​ಗೆ ಕೇರಳ ಹೈಕೋರ್ಟ್​ ತಡೆ ನೀಡಿದೆ.

ಕನ್ನಡದಲ್ಲಿ ರಿಲೀಸ್​ ಆಗಿದ್ದ ‘ಕಾಂತಾರ’ ಚಿತ್ರ ಕೇರಳದಲ್ಲಿ ಮಲಯಾಳಂ ವರ್ಷನ್​ ಬಿಡುಗಡೆ ಮಾಡಿದ್ದು ಖ್ಯಾತ ನಟ ಪೃಥ್ವಿರಾಜ್​ ಸುಕುಮಾರನ್​. ಅವರ ವಿತರಣಾ ಕಂಪನಿ ಮೂಲಕ ‘ಕಾಂತಾರ’ ರಿಲೀಸ್​ ಆಯಿತು. ‘ವರಾಹಂ ರೂಪಂ..’ ಹಾಡನ್ನು ಕಾಪಿ ಮಾಡಲಾಗಿದೆ ಎಂದು ಹಾಕಿದ್ದ ಕೇಸ್​ನಲ್ಲಿ ಪೃಥ್ವಿರಾಜ್​ ಸುಕುಮಾರನ್​​ ಅವರ ಹೆಸರನ್ನೂ ಸೇರಿಸಲಾಯಿತು. ಬಳಿಕ ಎಫ್​ಐಆರ್​ ದಾಖಲಾಯಿತು.

ಬಳಿಕ ಎಫ್​ಐಆರ್​ ಹಾಕಿರುವುದನ್ನು ಪ್ರಶ್ನಿಸಿ ಪೃಥ್ವಿರಾಜ್​ ಸುಕುಮಾರನ್​​ ಅವರು ಕೇರಳ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆದಿದ್ದು ಗುರುವಾರ (ಫೆಬ್ರವರಿ 16) ತೀರ್ಪು ಪ್ರಕಟ ಆಗಿದೆ. ‘ಪೃಥ್ವಿರಾಜ್​ ಸುಕುಮಾರನ್​ ಅವರು ಈ ಸಿನಿಮಾವನ್ನು ವಿತರಣೆ ಮಾಡಿದ್ದಾರೆ ಅಷ್ಟೇ. ಅದಕ್ಕಾಗಿ ಕಾಪಿರೈಟ್​ ವಿಷಯದಲ್ಲಿ ಅವರನ್ನು ಅನಗತ್ಯವಾಗಿ ಎಳೆದು ತರಲಾಗಿದೆ’ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ. ಮುಂದಿನ 7 ದಿನಗಳ ಕಾಲ ಯಾವುದೇ ವಿಚಾರಣೆ ಮಾಡಬಾರದು ಎಂದು ತೀರ್ಪು ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!