ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಭಾರೀ ಮಳೆ ಮುಂದುವರಿದಿದ್ದು, ರಾಜ್ಯದ ಕಲ್ಲರ್ಕುಟ್ಟಿ, ಪೊನ್ಮುಡಿ, ಕುಂಡಾಲ, ಲೋವರ್ ಪೆರಿಯಾರ್ ಮತ್ತು ತನ್ನಯಾರ್ ಅಣೆಕಟ್ಟುಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿ ಕೇಂದ್ರಗಳನ್ನು ಮುಚ್ಚಲಾಗಿದ್ದು, ತಿರುವನಂತಪುರ ಜಿಲ್ಲೆಯ ಪೊನ್ಮುಡಿ, ಕಲ್ಲಾರ್ ಮತ್ತು ಮಂಗಾಯಂ ಪರಿಸರ ಪ್ರವಾಸೋದ್ಯಮ ಕೇಂದ್ರಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಇನ್ನು ಕೊಲ್ಲಂನ ಅಚಾಂಕೋವ್ನಲ್ಲಿರುವ ಕುಂಭವರುಟ್ಟಿ ಜಲಪಾತಕ್ಕೆ ಕೂಡಾ ಪ್ರವಾಸಿಗರಿಗೆ ಪ್ರವೇಶ ನಿಷೇಧವಿದೆ. ತೆಂಗಾಶಿ ಕುಟ್ಟಲಂ ಜಲಪಾತವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.