ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ಯುವ ಸೆನ್ಸೇಷನ್ ಹೀರೋ ವಿಜಯ್ ದೇವರಕೊಂಡ ಬಹು ನಿರೀಕ್ಷಿತ ಲೈಗರ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ವೈಫಲ್ಯವನ್ನು ದಾಖಲಿಸಿದ್ದಲ್ಲದೆ, ವಿಜಯ್ ಅವರ ಪ್ಯಾನ್ ಇಂಡಿಯಾ ಪ್ರವೇಶವನ್ನು ಫ್ಲಾಪ್ ಮಾಡಿತು. ಇದರಿಂದಾಗಿ ಈ ನಾಯಕನ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಗೊಂದಲ ಉಂಟಾಗಿದೆ.
ಈ ವಿಷಯದ ಕುರಿತು ವಿಜಯ್ ದೇವರಕೊಂಡ ಇತ್ತೀಚೆಗೆ ಆಂಗ್ಲ ನಿಯಕಾಲಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ‘ಹಣ ಮತ್ತು ಯಶಸ್ಸು’ ಜೊತೆಗಿನ ಸಂಬಂಧದ ಬಗ್ಗೆ ವಿಜಯ್ ಅವರನ್ನು ಕೇಳಿದಾಗ, ವಿಜಯ್ ದೇವರಕೊಂಡ, “ನಾನು ಆ ಎರಡೂ ವಿಚಾರಗಳಲ್ಲಿ ಚೆಲ್ಲಾಟ ಆಡುತ್ತಿರುತ್ತೇನೆ. ನಾನು ಆ ಎರಡು ವಿಷಯಗಳಲ್ಲಿ ಆಕರ್ಷಿತನಾಗಿದ್ದೇನೆ. ನನ್ನ ಅಸಡ್ಡೆಯಿಂದ ರಿಸ್ಕ್ ಅನ್ನೋದು ಹೆಚ್ಚಾಗಿದೆ ಎಂಬ ಮಾತನ್ನು ಹೇಳಿದ್ದಾರೆ.
ನಾವು ದೊಡ್ಡ ಕನಸುಗಳು ಮತ್ತು ಭರವಸೆಗಳ ಕಡೆಗೆ ಓಡುತ್ತಿರುವಾಗ, ‘ಹಣ ಮತ್ತು ಯಶಸ್ಸು’ ನಮ್ಮೊಂದಿಗೆ ಅಡಗಿಕೊಳ್ಳುತ್ತವೆ. ಆ ಕ್ರಮದಲ್ಲಿ ಎರಡೂ ಬಂದು ಹೋಗುತ್ತವೆ. ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚು ಯಶಸ್ವಿಯಾಗಿದ್ದೇನೆ ಎಂಬಂತಹ ಕನಸು ಕಾಣುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ ಎಂದರು. ಸದ್ಯ ವಿಜಯ್ ಕೈಯಲ್ಲಿ ‘ಖುಷಿ’ ಸಿನಿಮಾ ಇದೆ. ಗೌತಮ್ ತಿನ್ನುರಿ ಜೊತೆ ಮತ್ತೊಂದು ಸಿನಿಮಾ ತಯಾರಾಗುತ್ತಿದೆ.