ದಿಗಂತ ವರದಿ ವಿಜಯಪುರ: ನಗರ ಸೇರಿದಂತೆ ಇತರೆ ಭಾಗದಲ್ಲಿ ಮಂಗಳವಾರ ಬೆಳಗ್ಗೆ 11.22 ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಸಾರ್ವಜನಿಕರಲ್ಲಿ ಮತ್ತೆ ಆತಂಕ ಮೂಡುವಂತಾಗಿದೆ.
ಇಲ್ಲಿನ ಕನಕದಾಸ ಬಡಾವಣೆ, ಶಿಕಾರಖಾನೆ, ಗೋಳಗುಮ್ಮಟ, ಎಪಿಎಂಸಿ, ರೇಲ್ವೆಸ್ಟೇಷನ್ ಪ್ರದೇಶ, ರಂಭಾಪೂರ, ಕವಲಗಿ ಸೇರಿದಂತೆ ಹಲವೆಡೆ ಲಘು ಭೂಕಂಪನ ಆಗಿದ್ದು, ಜನರು ಭೀತಿಗೊಳ್ಳುವಂತಾಗಿದೆ.
ಹಲವು ದಿನಗಳ ಬಳಿಕ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಭೀತಿ ಮರುಕಳಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಪರಿಶೀಲಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.