ಹೊಸ ದಿಗಂತ ವರದಿ ವಿಜಯಪುರ:
ನಗರ ಕನಕದಾಸ ಬಡಾವಣೆಯಲ್ಲಿ ಮನೆ ಹಾಗೂ ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ನಡೆದಿದೆ.
ಇಲ್ಲಿನ ಗಣೇಶ ಬೇಕರಿ, ಅಂಜಲಿ ಹೆಲ್ತ್ ಕೇರ್, ಬಿ.ಎಸ್. ಬಿರಾದಾರ ಅವರ ಮನೆ ಸೇರಿದಂತೆ 5 ಅಂಗಡಿಗಳಲ್ಲಿ ಅಂದಾಜು 35 ಸಾವಿರ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.