ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರರಂಗದಲ್ಲಿ ಒಂದಷ್ಟು ದಿನಗಳ ಗ್ಯಾಪ್ ಸಿಕ್ಕರೆ ಸಾಕು ಅವಕಾಶಗಳೂ ಕೂಡಾ ಕಡಿಮೆಯಾಗುತ್ತವೆ. ಅನೇಕ ನಟರ-ನಟಿಯರು ಈಗಾಗಲೇ ಇದನ್ನು ಎದುರಿಸಿದ್ದಾರೆ. ಈಗ ಮತ್ತೊಬ್ಬ ಒಬ್ಬ ಸ್ಟಾರ್ ವಿಲನ್ ಅದೇ ಪರಿಸ್ಥಿತಿಯಲ್ಲಿದ್ದಾರೆ. ಅರ್ಜುನ್ ಗೌಡ, ಅಭಿಮನ್ಯು, ವೀರ, ಬಿಂದಾಸ್, ಬೊಂಬಾಟ್ ಮುಂತಾದ ಕನ್ನಡ ಸೂಪರ್ ಹಿಟ್ ಸಿನಿಮಾಗಳಲ್ಲಿ ವಿಲನ್ ಆಗಿದ್ದ ರಾಹುಲ್ ದೇವ್ ಅವಕಾಶಗಳಿಲ್ಲದೆ ಪರದಾಡುತ್ತಿದ್ದಾರೆ.
ರಾಹುಲ್ ದೇವ್ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲೂ ಖಳನಾಯಕನಾಗಿ ನಟಿಸಿದ್ದರು. ಒಂದು ಮಾತಲ್ಲಿ ಹೇಳುವುದಾದರೆ, ಸ್ಟಾರ್ ವಿಲನ್ ಆಗಿ ತುಂಬಾ ಬ್ಯುಸಿಯಾಗಿದ್ದ ಇವರು ಈಗ ಖಾಲಿ ಕೈಯಲ್ಲಿ ಕುಳಿತಿದ್ದಾರಂತೆ. ಕಾರಣ, ರಾಹುಲ್ ದೇವ್ ಅವರ ಪತ್ನಿಯ ಹಠಾತ್ ನಿಧನದಿಂದಾಗಿ ಮಕ್ಕಳ ಆರೈಕೆಗಾಗಿ ಕೆಲ ದಿನಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಆ ಸಮಯದಲ್ಲಿ ಅವರು ಎರಡೂ ಮತ್ತು ಮೂರೋ ಹಿಂದಿ ಚಿತ್ರಗಳಲ್ಲಿ ಮಾತ್ರ ನಟಿಸಿದ್ದರು.
ಈ ಬಗ್ಗೆ ಇತ್ತೀಚೆಗೆ ಬಾಲಿವುಡ್ ಟಿವಿ ರಿಯಾಲಿಟಿ ಶೋವೊಂದರಲ್ಲಿ ರಾಹುಲ್ ದೇವ್ ಭಾಗವಹಿಸಿ ಅಳಲನ್ನು ತೋಡಿಕೊಂಡರು. “ನಮ್ಮ ಕುಟುಂಬದಲ್ಲಿ ಸಂಭವಿಸಿದ ದುರಂತದಿಂದಾಗಿ ನಾನು ಸ್ವಲ್ಪ ಸಮಯ ಚಲನಚಿತ್ರಗಳಿಂದ ದೂರ ಉಳಿದೆ. ಚಿತ್ರೋದ್ಯಮದಲ್ಲಿ ವಿಷಯಗಳು ಬಹಳ ವೇಗವಾಗಿ ಬದಲಾಗುತ್ತವೆ. ಅಷ್ಟೇ ಬೇಗ ಸಿನಿರಂಗ ನನ್ನನ್ನು ಕೂಡ ಅಷ್ಟೇ ಬೇಗ ಮರೆತುಬಿಟ್ಟಿದೆ. ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ ನಾನು ಈಗ ಟಿವಿ ಶೋನಲ್ಲಿ ಭಾಗವಹಿಸುವ ಸಂದರ್ಭ ಬಂದೊದಗಿದೆ. ‘ನಾನು ಸಂಕಷ್ಟದಲ್ಲಿದ್ದಾಗ ನನ್ನ ಸ್ನೇಹಿತರು ಸುನೀಲ್ ಶೆಟ್ಟಿ, ನಿರ್ದೇಶಕರಾದ ನಿಖಿಲ್ ಅಡ್ವಾಣಿ, ಅನೀಸ್ ಬಾಜ್ಮಿ ಸಹಾಯ ಮಾಡಿದರೆಂದು ನೆನೆದು ಭಾವುಕರಾದರು. ಈ ವಿಚಾರ ಗೊತ್ತಾದ ಬಳಿಕವಾದರೂ ರಾಹುಲ್ ದೇವ್ ಅವರಿಗೆ ಅವಕಾಶಗಳು ಸಿಗುತ್ತಾ ಕಾದು ನೋಡಬೇಕು.