ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಸೋತಿರುವ ತಂಡಕ್ಕೆ ಮೂರನೇ ಟೆಸ್ಟ್ ಗೆದ್ದು, ಇತಿಹಾಸ ನಿರ್ಮಿಸುವ ತವಕ ಹೆಚ್ಚಾಗಿದೆ.
ಆದರೆ ಮ್ಯಾನೇಜ್ಮೆಂಟ್ಗೆ ಹೊಸ ತಲೆನೋವೊಂದು ಶುರು ಆಗಿದೆ. ಎರಡನೇ ಟೆಸ್ಟ್ನಲ್ಲಿ ಸೋಲು ಅನುಭವಿಸಿರುವುದರಿಂದ ಮೂರನೇ ಟೆಸ್ಟ್ಗೆ ಯಾವುದೇ ಚಾನ್ಸ್ ತೆಗೆದುಕೊಳ್ಳಲು ತಂಡ ತಯಾರಿಲ್ಲ. ಇದೀಗ ಪ್ಲೇಯಿಂಗ್ 11 ಆಯ್ಕೆ ದೊಡ್ಡ ತಲೆನೋವಾಗಿದೆ.
ಇಂಜುರಿಯಿಂದ ಕ್ಯಾಪ್ಟನ್ ವಿರಾಟ್ ಕೋಹ್ಲಿ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಕೋಹ್ಲಿ ಮೂರನೇ ಟೆಸ್ಟ್ಗೆ ವಾಪಾಸಾಗೋದು ಖಚಿತ ಎಂದು ಕೋಚ್ ದ್ರಾವಿಡ್ ಹೇಳಿದ್ದಾರೆ.
ಕೋಹ್ಲಿ ತಂಡಕ್ಕೆ ವಾಪಾಸಾದರೆ, ಅವರಿಗೆ ಜಾಗ ಮಾಡಿಕೊಡಲು ಒಬ್ಬರನ್ನು ಕೈಬಿಡಲೇಬೇಕಿದೆ. ಇದು ಯಾರು ಎನ್ನುವುದೇ ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆನೋವಾಗಿದೆ.
ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ ಮತ್ತು ಹನುಮ ವಿಹಾರಿ ಈ ಮೂವರಲ್ಲಿ ಒಬ್ಬರು ಸ್ಥಾನ ಬಿಟ್ಟುಕೊಡಬೇಕಿದೆ. ಹನುಮ ವಿಹಾರಿ ಡ್ರಾಪ್ ಆಗುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ.