June 19, 2026
Friday, June 19, 2026
spot_img

ಈಶಾನ್ಯ ಗಡಿಯಲ್ಲಿ ಜಲ ಕ್ರಾಂತಿ: ಚೀನಾದ ಬೃಹತ್ ಅಣೆಕಟ್ಟಿನ ಪ್ರಭಾವ ಕುಗ್ಗಿಸಲು ಅರುಣಾಚಲದಲ್ಲಿ ಭಾರತದ ಹೈಟೆಕ್ ಕೌಂಟರ್ ಯೋಜನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ ಈಶಾನ್ಯ ಗಡಿಯಲ್ಲಿ ಚೀನಾ ಮತ್ತೊಂದು ಜಲ ವಿವಾದದ ಕಿಡಿಯನ್ನು ಹೊತ್ತಿಸಿದೆ. ಭಾರತದ ತೀವ್ರ ಆಕ್ಷೇಪದ ನಡುವೆಯೂ ಚೀನಾ ಸರ್ಕಾರವು ಟಿಬೆಟ್‌ನ ಕೊಳ್ಳದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಅಣೆಕಟ್ಟು ನಿರ್ಮಾಣ ಕಾರ್ಯವನ್ನು ಬಿರುಸಿನಿಂದ ಆರಂಭಿಸಿದೆ. ಇದಕ್ಕೆ ಪ್ರತಿಯಾಗಿ ಭಾರತ ಸರ್ಕಾರವು ಅರುಣಾಚಲ ಪ್ರದೇಶದಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸುವ ಮೂಲಕ ಚೀನಾದ ಜಲ ತಂತ್ರಜ್ಞಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಮಾಸ್ಟರ್ ಪ್ಲಾನ್ ರೂಪಿಸಿದೆ.

ಇಂಟೆಲಿಜೆನ್ಸ್ ಮಾಹಿತಿ ಮತ್ತು ಇತ್ತೀಚಿನ ಸ್ಯಾಟಲೈಟ್ ಚಿತ್ರಗಳು ಚೀನಾದ ಈ ಬೃಹತ್ ಆಕ್ರಮಣಕಾರಿ ಮೂಲಸೌಕರ್ಯ ಅಭಿವೃದ್ಧಿಯನ್ನು ಖಚಿತಪಡಿಸಿವೆ.

ಚೀನಾದ ಮಹಾ ಯೋಜನೆ: ಏನಿದರ ವಿಶೇಷತೆ?

ಟಿಬೆಟ್‌ನ ಯಾರ್ಲುಂಗ್ ತ್ಸಾಂಗ್ಪೋ ನದಿಯ ಕೆಳಭಾಗದಲ್ಲಿ ಸುಮಾರು 167 ಶತಕೋಟಿ ಡಾಲರ್ (ರೂ. 14 ಲಕ್ಷ ಕೋಟಿಗೂ ಅಧಿಕ) ವೆಚ್ಚದಲ್ಲಿ ಈ ಮೆಗಾ ಹೈಡ್ರೋ ಪವರ್ ಪ್ರಾಜೆಕ್ಟ್ ನಿರ್ಮಾಣವಾಗುತ್ತಿದೆ. ಇದು ಚೀನಾದ ಪ್ರಸಿದ್ಧ ‘ತ್ರೀ ಗೋರ್ಜಸ್’ ಅಣೆಕಟ್ಟಿಗಿಂತ ಮೂರು ಪಟ್ಟು ದೊಡ್ಡದಾಗಿರಲಿದೆ. ಈ ಅಣೆಕಟ್ಟು ಭಾರತದ ಅರುಣಾಚಲ ಪ್ರದೇಶದ ಗಡಿಯಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿದೆ. ಈ ಯೋಜನೆಯು ವಾರ್ಷಿಕವಾಗಿ 300 ಶತಕೋಟಿ ಕಿಲೋವ್ಯಾಟ್ ಅವರ್ (60 GW) ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದು ಇಡೀ ಬ್ರಿಟನ್ ದೇಶದ ವಾರ್ಷಿಕ ವಿದ್ಯುತ್ ಬಳಕೆಗೆ ಸಮಾನವಾಗಿದೆ.

ಭಾರತಕ್ಕೆ ಎದುರಾಗಿರುವ ಭೀತಿ ಏನು?

ಚೀನಾದ ಈ ಅಣೆಕಟ್ಟನ್ನು “ಟಿಕ್ಕಿಂಗ್ ಜಲ ಬಾಂಬ್” ಎಂದು ವಿಶ್ಲೇಷಿಸಲಾಗುತ್ತಿದೆ. ಯುದ್ಧ ಅಥವಾ ಗಡಿ ಉದ್ವಿಗ್ನತೆಯ ಸಮಯದಲ್ಲಿ ಚೀನಾ ಏಕಪಕ್ಷೀಯವಾಗಿ ಅಣೆಕಟ್ಟಿನ ನೀರನ್ನು ಒಟ್ಟಿಗೆ ಬಿಟ್ಟರೆ ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಭೀಕರ ಕೃತಕ ಪ್ರವಾಹ ಸೃಷ್ಟಿಯಾಗಬಹುದು. ಒಣ ಹವೆ ಇರುವ ದಿನಗಳಲ್ಲಿ ಚೀನಾ ನೀರನ್ನು ತಡೆಹಿಡಿದರೆ, ಭಾರತದ ಈಶಾನ್ಯ ಭಾಗದ ಜೀವನಾಡಿಯಾಗಿರುವ ಬ್ರಹ್ಮಪುತ್ರ ನದಿಯ ನೀರಿನ ಹರಿವು ಶೇಕಡಾ 85 ರಷ್ಟು ಕುಸಿಯಬಹುದು. ಚೀನಾ ಯಾವುದೇ ಅಂತಾರಾಷ್ಟ್ರೀಯ ಜಲ ಹಂಚಿಕೆ ಒಪ್ಪಂದಗಳಿಗೆ ಸಹಿ ಹಾಕದಿರುವುದು ಭಾರತದ ಆತಂಕವನ್ನು ಹೆಚ್ಚಿಸಿದೆ.

ಇದನ್ನೂ ಓದಿ:

ಭಾರತದ ತಿರುಗೇಟು: ಅರುಣಾಚಲದಲ್ಲಿ ಕೌಂಟರ್ ಪ್ಲಾನ್!

ಚೀನಾದ ಈ ಜಲ ರಾಜತಾಂತ್ರಿಕತೆಗೆ ಮಣಿಯದ ಭಾರತ ಸರ್ಕಾರವು, ಗಡಿಯಲ್ಲಿ ತನ್ನದೇ ಆದ ಬಲವಾದ ರಕ್ಷಾಕವಚ ರೂಪಿಸುತ್ತಿದೆ.

ಚೀನಾದ ಅಣೆಕಟ್ಟಿನ ಪ್ರಭಾವವನ್ನು ತಗ್ಗಿಸಲು ಭಾರತವು ಅರುಣಾಚಲ ಪ್ರದೇಶದಲ್ಲಿ 11.2 ಗಿಗಾವ್ಯಾಟ್ (GW) ಸಾಮರ್ಥ್ಯದ ಬೃಹತ್ ಅಣೆಕಟ್ಟು ನಿರ್ಮಾಣವನ್ನು ವೇಗಗೊಳಿಸಿದೆ. ಚೀನಾ ಹಠಾತ್ ನೀರನ್ನು ಬಿಟ್ಟರೂ ಅದನ್ನು ತಡೆದು ಶೇಖರಿಸುವ ಮತ್ತು ನಿಯಂತ್ರಿತವಾಗಿ ಹರಿಸುವ ಬೃಹತ್ ಜಲ ಸಂಗ್ರಹಣಾ ಸಾಮರ್ಥ್ಯವನ್ನು ಈ ಭಾರತೀಯ ಅಣೆಕಟ್ಟು ಹೊಂದಿರಲಿದೆ.

ಕೇಂದ್ರ ಸರ್ಕಾರವು ಈ ಜಲ ವಿವಾದವನ್ನು ಕೇವಲ ಪ್ರಾದೇಶಿಕ ವಿಷಯವಾಗಿ ನೋಡದೆ, ರಾಷ್ಟ್ರೀಯ ಭದ್ರತೆಯ ಅತ್ಯಂತ ಸೂಕ್ಷ್ಮ ಸವಾಲಾಗಿ ಪರಿಗಣಿಸಿ ಗಡಿಯಲ್ಲಿ ಕಠಿಣ ನಿಗಾ ಇರಿಸಿದೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !