ರಾಜಸ್ಥಾನದಲ್ಲಿ ಎಲ್ಲಾ 25 ಸ್ಥಾನಗಳನ್ನು ಖಂಡಿತ ನಾವು ಗೆಲ್ಲುತ್ತೇವೆ: ಓಂ ಬಿರ್ಲಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

“ಸಂವಿಧಾನವನ್ನು ಉಳಿಸಿ” ಎಂಬ ಪ್ರತಿಪಕ್ಷಗಳ ರ್ಯಾಲಿ ಕರೆಯನ್ನು ತಳ್ಳಿಹಾಕಿದ ಲೋಕಸಭಾ ಸ್ಪೀಕರ್ ಮತ್ತು ರಾಜಸ್ಥಾನದ ಕೋಟಾದ ಬಿಜೆಪಿ ಅಭ್ಯರ್ಥಿ ಓಂ ಬಿರ್ಲಾ ಅವರು ಸಂವಿಧಾನವು ಉತ್ತಮ ಕೈಯಲ್ಲಿದೆ ಎಂದು ಶುಕ್ರವಾರ ಪ್ರತಿಪಾದಿಸಿದರು.

ಬಿರ್ಲಾ ಅವರು ತಮ್ಮ ಪತ್ನಿ ಅಮಿತಾ ಬಿರ್ಲಾ ಅವರೊಂದಿಗೆ ಇಂದು ಕೋಟಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಮತದಾನ ಬಳಿಕ ಮಾತನಾಡಿದ ಬಿರ್ಲಾ, “ಇದು ಸಂವಿಧಾನವನ್ನು ಉಳಿಸುವ ಹೋರಾಟವಲ್ಲ, ಸಂವಿಧಾನವು ಉತ್ತಮ ಕೈಯಲ್ಲಿದೆ. ವಿರೋಧ ಪಕ್ಷದವರು ಕೇವಲ ಸುಳ್ಳುಗಳನ್ನು ಹರಡುತ್ತಿದ್ದಾರೆ. ಸಾಮಾಜಿಕ ರಚನೆ ಮತ್ತು ಸಾಮಾಜಿಕ ಮೀಸಲಾತಿಯು ಹಾಗೇ ಉಳಿಯುತ್ತದೆ” ಎಂದು ಹೇಳಿದರು.

ಬಿಜೆಪಿಯ ಮಾಜಿ ಶಾಸಕ ಗುಂಜಾಲ್ ಅವರು ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಸೇರ್ಪಡೆಯಾದ ಬಗ್ಗೆ, ಮಾತನಾಡಿದ ಬಿರ್ಲಾ , “ಅವರು ಅಲ್ಲಿ ಇಲ್ಲಿ ಪಕ್ಷಾಂತರ ಮಾಡುತ್ತಲೇ ಇದ್ದಾರೆ. ಈ ಹಿಂದೆಯೂ ಅವರು ಚುನಾವಣೆಗೆ ಸ್ಪರ್ಧಿಸಲು ಬೇರೆ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದರು” ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!