ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಕಿ ಸಲಹಿದ ಮಗಳ ಮದುವೆ ಅದ್ದೂರಿಯಾಗಿ ಮಾಡುವ ಕನಸು ಕೊನೆಗೂ ನನಸಾಗಿದೆ. ಅದ್ದೂರಿಯಾಗಿ ಕಲ್ಯಾಣ ಮಂಟಪವೊಂದರಲ್ಲಿ ಮಗಳ ಮದುವೆ ನಡೆಯುತ್ತಿದ್ದಂತೆ ಇತ್ತ ಸಂತೋಷದಲ್ಲಿ ವಧುವಿನ ತಂದೆ ಕಣ್ಣಮುಚ್ಚಿದ್ದಾರೆ. ಸಂತೋಷ, ಸಂಭ್ರಮದಿಂದ ತುಂಬಿ ತುಳುಕುತ್ತಿದ್ದ ಕಲ್ಯಾಣ ಮಂಟಪದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ವಾದ್ಯಗಳ ಬದಲಿಗೆ ಕುಟುಂಬಸ್ಥರ ಆರ್ತನಾದ ಮುಗಿಲು ಮುಟ್ಟಿದ ದಾರುಣ ಘಟನೆ ವರಂಗಲ್ ಜಿಲ್ಲೆಯಲ್ಲಿ ನಡೆದಿದೆ.
ವಾರಂಗಲ್ ಜಿಲ್ಲೆಯ ವೇಣುರಾವ್ ಕಾಲೋನಿಯ ಬೋರಿಗಂ ವೆಂಕಟನರಸಯ್ಯ ಅವರು ತಮ್ಮ ಪುತ್ರಿ ಹಾರಿಕಾಳ ವಿವಾಹವನ್ನು ಕಾಶಿಬುಗ್ಗದ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನೆರವೇರಿಸಿದರು. ಅರುಂಧತಿ ನಕ್ಷತ್ರ ತೋರಿಸುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮದುವೆ ಶಂಬ್ರಮ ಮನೆ ಮಾಡಿದ್ದ ಕುಟುಂಬದಲ್ಲೀಗ ಸೂತಕದ ಛಾಯೆ ಆವರಿಸಿದೆ. ಮಗಳು ಅತ್ತೆ ಮನೆ ಸೇರುವ ಮುನ್ನವೇ ವಿಧಿ ಬೇರೆಯೇ ಬಯಸಿದೆ. ತಂದೆಯನ್ನು ಕಳೆದುಕೊಂಡ ನವವಧು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.