ಪೆರೋಲ್ ಮೇಲೆ ಜೈಲಿನಿಂದ ಹೊರಗೆ ಬಂದ ದೆಹಲಿ ಗಲಭೆ ಆರೋಪಿ ಶಾರೂಖ್ ಪಠಾಣ್ ಗೆ ಅದ್ಧೂರಿ ಸ್ವಾಗತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

4 ಗಂಟೆಗಳ ಕಾಲ ಪೆರೋಲ್ ಮೇಲೆ ಹೊರಬಂದಿದ್ದ ದೆಹಲಿ ಗಲಭೆ ಪ್ರಕರಣದ ಆರೋಪಿ ಶಾರೂಖ್ ಪಠಾಣ್ ಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಂದೆಯನ್ನು ಭೇಟಿ ಮಾಡಲು ಕೋರ್ಟ್ ಭೇಟಿ ಮಾಡುವುದಕ್ಕಷ್ಟೇ ಅವಕಾಶ ಮಾಡಿಕೊಡಲಾಗುತ್ತಿದೆಎಂದು ಪೆರೋಲ್ ನೀಡುವಾಗ ಕೋರ್ಟ್ ಹೇಳಿತ್ತು.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗತೊಡಗಿದ್ದು, ಶಾರೂಖ್ ಪಠಾಣ್, ಪೊಲೀಸರೊಂದಿಗೆ ಬರುತ್ತಿದ್ದಾಗ ಗುಂಪೊಂದು ಆತನ ಪರವಾಗಿ ಘೋಷಣೆ ಕೂಗಿರುವುದು ದಾಖಲಾಗಿದೆ.
2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಗಲಭೆಯಲ್ಲಿ ಶಾರೂಖ್ ಪಠಾಣ್ ಪ್ರಮುಖ ಆರೋಪಿಯಾಗಿದ್ದು, ಜಫ್ರಾಬಾದ್ ಪ್ರದೇಶದಲ್ಲಿ ಲೋಡ್ ಮಾಡಿದ ಪೊಲೀಸರತ್ತ ಪಿಸ್ತೂಲನ್ನು ತೋರಿಸಿದ್ದನು.
ಕಳೆದ ವರ್ಷ ಮಾ.03 ರಂದು ಬಂಧನಕ್ಕೊಳಗಾಗಿದ್ದ ಪಠಾಣ್ ತಿಹಾರ್ ಜೈಲಿನಲ್ಲಿದ್ದಾನೆ. ಗಲಭೆಯಲ್ಲಿ 50 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!