ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿರುವ ಬಾಲಿವುಡ್ನ ದಾದಾ ಮಿಥುನ್ ದಾ ಅವರ ಈ ಫೋಟೋ ಹಿಂದಿನ ಅಸಲಿಯತ್ತನ್ನು ಖುದ್ದು ಅವರ ಪುತ್ರ ಮಿಮೋಹ್ ಬಹಿರಂಗಗೊಳಿಸಿದ್ದಾರೆ.
ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಆಸ್ಪತ್ರೆಯ ಬೆಡ್ನಲ್ಲಿ ಮಲಗಿರುವ ಈ ಫೋಟೋ ವೈರಲ್ ಆಗಿತ್ತಲ್ಲದೆ ಅವರ ಅಭಿಮಾನಿಗಳಲ್ಲಿ ಆತಂಕ ಹುಟ್ಟುಹಾಕಿತ್ತು. ಈ ನಡುವೆ ಹಿರಿಯ ನಟನ ಚೇತರಿಕೆಗಾಗಿ ಬಿಜೆಪಿ ಮುಖಂಡ ಸಂಜಯ್ ಸಿಂಗ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಡಾ. ಅನುಪಮ್ ಹಜ್ರಾ ಕೂಡಾ ಬೆಂಗಾಳಿ ಭಾಷೆಯಲ್ಲಿ ಟ್ವೀಟ್ ಮಾಡಿ, ‘ಬೇಗ ಗುಣಮುಖರಾಗಿ ಮಿಥುನ್ ದಾದಾ’ ಎಂದು ಬರೆದುಕೊಂಡಿದ್ದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿತ್ತು.
ಇದೀಗ ಮಿಥುನ್ ಪುತ್ರ ಮಿಮೋಹ್ ಟ್ವೀಟ್ ಮಾಡಿದ್ದು, ಮೂತ್ರಪಿಂಡದಲ್ಲಿನ ಕಲ್ಲು ತೆಗೆಸಲು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಮನೆಗೆ ಮರಳಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ