ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಗಾದಿ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದ್ದು, ರೈತರು ನೆಮ್ಮದಿಯಾಗಿರುತ್ತಾರೆ ಎಂದು ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಕೋಲಾರದಲ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಯುಗಾದಿ ನಂತರ ಪ್ರಮುಖ ಧಾರ್ಮಿಕ ಮುಖಂಡನ ಸಾವು ಆಗಲಿದೆ, ಮತಾಂಧತೆ, ಯುದ್ಧ ಹಾಗೂ ದ್ವೇಷ ಹೆಚ್ಚಾಗಲಿದೆ ಎಂದಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಬಗ್ಗೆ ಈಗಲೇ ಹೇಳುವುದಿಲ್ಲ. ಅದಕ್ಕೆ ಯುಗಾದಿ ಕಳೆಯಬೇಕು ಎಂದು ಹೇಳಿ ಜನರಲ್ಲಿ ಕುತೂಹಲ ಮೂಡಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಸಾಕಷ್ಟು ತೊಂದರೆಗಳಾಗಲಿವೆ, ಅಗ್ನಿ ಅವಘಡ, ನೀರಿನಿಂದ ಬರುವ ಸಮಸ್ಯೆ, ಯುದ್ಧ, ಸಾಕಷ್ಟು ಸಾವು ನೋವು, ಭೂಕಂಪ ಹಾಗೂ ಬಾಂಬ್ ಸ್ಫೋಟವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.