ಬಿಜೆಪಿ ಟಿಕೆಟ್ ಬೇಕೇ ಬೇಕು, ಟವರ್ ಏರಿ ಕುಳಿತ ಬಿಜೆಪಿ ಕಾರ್ಯಕರ್ತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಇನ್ನಿತರ ಪಕ್ಷಗಳು ಈಗಾಗಲೇ ತಮ್ಮ ಪಕ್ಷದ ಅಭ್ಯರ್ಥಿ ಯಾರು ಎಂದು ತಿಳಿಸಿವೆ. ಟಿಕೆಟ್ ಸಿಗೋಕು ಮುನ್ನವೇ ಪಕ್ಷಕ್ಕೆ ಗುಡ್ ಬೈ ಹೇಳಿರುವವರು ಇದ್ದಾರೆ, ಇನ್ನು ಟಿಕೆಟ್ ಸಿಗಲಿಲ್ಲ ಎಂದು ಪಕ್ಷ ಬಿಟ್ಟವರೂ ಇದ್ದಾರೆ ಆದರೆ ಇಲ್ಲೊಬ್ಬ ವ್ಯಕ್ತಿ ನನಗೆ ಟಿಕೆಟ್ ಬೇಕೇ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾನೆ.

ಈತ ಕುಳಿತಿರೋದು ನೆಲದ ಮೇಲಲ್ಲ ಬಿಎಸ್‌ಎನ್‌ಎಲ್ ಟವರ್ ಮೇಲೆ! ಹೌದು, ಅಜ್ಜಂಪುರದ ಶಿವನಿ ಆರ್‌ಎಸ್ ಗ್ರಾಮದ ವ್ಯಕ್ತಿ ರಂಗಪ್ಪ ನನಗೆ ಬಿಜೆಪಿ ಟಿಕೆಟ್ ಬೇಕೇ ಬೇಕು ಎಂದು ರಂಪ ಮಾಡಿದ್ದು, ಟವರ್ ಏರಿ ಕುಳಿತಿದ್ದಾನೆ. ಬೆಳಗ್ಗೆ ಏಳರಿಂದಲೇ ಟಿಕೆಟ್ ಏರಿ ರಂಗಪ್ಪ ಕುಳಿತಿದ್ದು, ಯಾರ ಮಾತಿಗೂ ಆತ ಜಗ್ಗುತ್ತಿಲ್ಲ.

ಟಿಕೆಟ್ ಕೊಡಬೇಕು, ಮಾಧ್ಯಮದಲ್ಲಿ ಕವರೇಜ್ ಆಗಬೇಕು ಇಲ್ಲವಾದರೆ ಇಲ್ಲಿಂದ ಹಾರುತ್ತೇನೆ ಎಂದು ರಂಗಪ್ಪ ಬೆದರಿಕೆ ಹಾಕಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!