ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿಗೆ ಸಾಲು ಸಾಲು ರಜೆ ಇದೆ, ಆದರೆ ಬರೀ ಮಜಾ ಮಾಡದೇ ಸ್ವಲ್ಪ ಓದ್ಕೊ ಎಂದು ತಾಯಿ ಹೇಳಿದ್ದಕ್ಕೆ ಮನನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೆಳಗಾವಿಯ ಮೂಡಲಗಿ ಪಟ್ಟಣದ ದೇಶಪಾಂಡೆ ಫ್ಲ್ಯಾಟ್ನಲ್ಲಿ ಎಂಟನೇ ತರಗತಿ ವಿದ್ಯಾರ್ಥಿ ಸಮರ್ಥ್ ಸುರೇಶ್ ಭಜಂತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರನಾಗಿದ್ದಾನೆ.
ಸ್ಕೂಲ್ಗೆ ರಜೆ ಇದೆ, ಜಾಸ್ತಿ ತುರುಗಬೇಡ ಓದ್ಕೋ ಎಂದು ಹೇಳಿದ್ದಕ್ಕೆ ಮಗ ಮನನೊಂದು ರೂಮ್ ಬಾಗಿಲು ಹಾಕಿಕೊಂಡು ಸೀರೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.