ಭಾರತದಲ್ಲಿ ಕಾಂಗ್ರೆಸ್ ಇರುವಾಗ ‘ಮನಿ ಹೈಸ್ಟ್’ ಕಾಲ್ಪನಿಕ ಕಥೆ ಯಾಕೆ ಬೇಕು? ಕೈ ವಿರುದ್ಧ ಪ್ರಧಾನಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದ ಡಿಸ್ಟಿಲರಿಗಳ ಮೇಲೆ ಸರಣಿ ದಾಳಿಯಲ್ಲಿ ಆದಾಯ ತೆರಿಗೆ ಇಲಾಖೆ ಒಟ್ಟಾರೆ 350 ಕೋಟಿ ರೂಪಾಯಿ ಕಪ್ಪುಹಣ ಹಾಗೂ ಸುಮಾರು ಮೂರು ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.

ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದು, ಜನಪ್ರಿಯ ಮನಿಹೈಸ್ಟ್ ಸೀರೀಸ್ ಉಲ್ಲೇಖ ಮಾಡಿದ್ದಾರೆ.

ಭಾರತದಲ್ಲಿ ದಂತಕಥೆಯಾಗಿರುವ ಕಾಂಗ್ರೆಸ್ ಪಕ್ಷ ಇರುವಾಗ ಮನಿಹೈಸ್ಟ್ ನಂಥ ಕಾಲ್ಪನಿಕ ಕಥೆ ಯಾರಿಗೆ ಬೇಕು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪ್ರಸ್ತುತಪಡಿಸುತ್ತಿರುವ ಮನಿ ಹೈಸ್ಟ್  ಹೀಗಿದೆ ನೋಡಿ ಎನ್ನುವ ವಿಡಿಯೋ ಒಂದನ್ನು ಅಪಲ್‌ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!