ಹೊಸದಿಗಂತ ಡಿಜಿಟಲ್ ಡೆಸ್ಕ್
ಕಾಂಗ್ರೆಸ್ನಲ್ಲಿ ಪ್ರಸ್ತುತ ಏರ್ಪಟ್ಟಿರುವ ಅವ್ಯವಸ್ಥೆಗೆ ಅಧಿಕಾರ ವಿಕೇಂದ್ರೀಕರಣವೇ ಉತ್ತರ ಎಂದು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಸಿದ ಶಶಿ ತರೂರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಮುಖ್ಯಸ್ಥರಾದರೆ ಕಾಂಗ್ರೆಸ್ ನಲ್ಲಿ ಬದಲಾವಣೆ ತರುವ ತಮ್ಮ ದೃಷ್ಟಿಕೋನವನ್ನು ವಿವರಿಸಿದರು. ʼಪಕ್ಷದ ಹೈಕಮಾಂಡ್ ಸಂಸ್ಕೃತಿಯನ್ನು ಬದಲಾಯಿಸುತ್ತೇನೆʼ ಎಂದು ಹೇಳಿದರು.
ʼಪ್ರತಿಯೊಂದು ವಿಚಾರವನ್ನು ದೆಹಲಿಗೆ ವರ್ಗಾಯಿಸುವʼ ಅಭ್ಯಾಸವನ್ನು ಸಮಸ್ಯೆ ಎಂದು ಗುರುತಿಸಿದ ಅವರು, ಇನ್ನುಮುಂದೆ ಎಲ್ಲವನ್ನು ʼಕಾಂಗ್ರೆಸ್ ಅಧ್ಯಕ್ಷರು ನಿರ್ಧರಿಸುತ್ತಾರೆʼ ಎಂಬ ಮಾತಿಗೆ ಆಸ್ಪದ ನೀಡುವುದಿಲ್ಲ ಎಂದರು.
ಆಂತರಿಕ ಚುನಾವಣೆ ಮತ್ತು ಸ್ಥಿರ ನಾಯಕತ್ವಕ್ಕಾಗಿ ಒತ್ತಾಯಿಸಿ ಸೋನಿಯಾ ಗಾಂಧಿಗೆ ಪತ್ರ ಬರೆದ ‘ಜಿ-23’ ಭಿನ್ನಮತೀಯರ ಗುಂಪಿನ ಪರವಾಗಿ ಶಶಿ ತರೂರ್ ನಾಮಪತ್ರ ಸಲ್ಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಗಾಂಧಿ ಕುಟುಂಬ ಬೆಂಬಲಿತ ʼಅಧಿಕೃತʼ ಅಭ್ಯರ್ಥಿ ಎಂದು ಕರೆದ ಅವರು ಪಕ್ಷದ ಉನ್ನತ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆಯವರನ್ನು ಬೆಂಬಲಿಸುವುದಾಗಿ ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ. ʼಪಕ್ಷದಲ್ಲಿ ಯಥಾಸ್ಥಿತಿಯನ್ನು ಪ್ರತಿನಿಧಿಸುವವರ ಹಿಂದೆ ಹಿರಿಯ ತಲೆಗಳು ಒಗ್ಗೂಡುವುದರಲ್ಲಿ ಆಶ್ಚರ್ಯವಿಲ್ಲ. ನೀವು ಪಕ್ಷದಲ್ಲಿ ಬದಲಾವಣೆ ಮತ್ತು ಪ್ರಗತಿಯನ್ನು ಬಯಸಿದರೆ ನನಗೆ ಮತ ನೀಡಿʼ ಎಂದು ಅವರು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ʼಕಾಂಗ್ರೆಸ್ನ ಭೀಷ್ಮ ಪಿತಾಮಹʼ ಎಂದು ಕರೆದ ಅವರು, ʼನಾವು ಪ್ರತಿಸ್ಪರ್ಧಿಗಳಲ್ಲ, ನಾವು ಸಹೋದ್ಯೋಗಿಗಳುʼ ಎಂದು ಹೇಳಿದರು.
ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದ ವೇಳೆ ʼನೀವು ಸ್ಪರ್ಧಿಸಲು ಅತ್ಯಂತ ಸ್ವಾಗತʼ ಎಂದಿದ್ದಾರೆ. ಗಾಂಧಿ ಕುಟುಂಬವು ತಟಸ್ಥವಾಗಿರುವ ಕಾರಣ ʼಅಧಿಕೃತ ಅಭ್ಯರ್ಥಿʼ ಇರುವುದಿಲ್ಲ ಎಂದು ಹೇಳಿದರು ಎಂದು ಶಶಿ ತರೂರ್ ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ