ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾ ಸರಕಾರದ ವಿರುದ್ಧ ಬಂಡಾಯ ಎದ್ದ ಏಕನಾಥ್ ಶಿಂಧೆ , ತಮ್ಮ ಜೊತೆಗೆ 50 ಶಾಸಕರಿದ್ದಾರೆ , ಎಲ್ಲ ಶಾಸಕರೊಂದಿಗೆ ಶೀಘ್ರದಲ್ಲೇ ಮುಂಬೈಗೆ ಹೋಗುವುದಾಗಿ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಬಂಡಾಯ ಶಾಸಕರು ಶಿವಸೇನೆ ಹಾಗೂ ಬಾಳಾಸಾಹೇಬ ಠಾಕ್ರೆ ಅವರ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಎಲ್ಲ ಶಾಸಕರು ತಮ್ಮ ಮುಂದಿನ ದಾರಿ ಏನೆಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದ್ದಾರೆ ಎಂದುಹೇಳಿದರು.