ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹರಿದ್ವಾರ, ಡೆಹ್ರಾಡೂನ್ ಮತ್ತು ಋಷಿಕೇಶ ದೇವಾಲಯಗಳಲ್ಲಿ ಭಕ್ತರು ತುಂಡು ಉಡುಪು ಧರಿಸಿ ದೇವಸ್ಥಾನಕ್ಕೆ ಬರುವುದನ್ನು ನಿಷೇಧಿಸುವುದಾಗಿ ಮಹಾನಿರ್ವಾಣಿ ಪಂಚಾಯತ್ ಆರಾ ಪ್ರಕಟಿಸಿದೆ. ಉತ್ತರ ಭಾರತದ ಯಾವುದೇ ದೇವಸ್ಥಾನದಲ್ಲಿ ಇಂತಹ ವಸ್ತ್ರ ಸಂಹಿತೆ ಜಾರಿಯಾಗಿರುವುದು ಇದೇ ಮೊದಲು. ಆದರೆ, ದಕ್ಷಿಣದ ಹಲವು ದೇವಸ್ಥಾನಗಳಲ್ಲಿ ಈಗಾಗಲೇ ಈ ನೀತಿ ಜಾರಿಯಲ್ಲಿದೆ.
ಹರಿದ್ವಾರ, ಡೆಹ್ರಾಡೂನ್ ಮತ್ತು ಉತ್ತರಾಖಂಡದ ಋಷಿಕೇಶದಲ್ಲಿರುವ ದೇವಸ್ಥಾನಗಳಿಗೆ ಭಕ್ತರು ತುಂಡು ಬಟ್ಟೆ ಧರಿಸಿ ಪ್ರವೇಶಿಸುವುದನ್ನು ನಿಷೇಧಿಸುವುದಾಗಿ ಮಹಾನಿರ್ವಾಣಿ ಪಂಚಾಯತ್ ಅಖಾರಾ ಘೋಷಿಸಿದೆ. ಹರಿದ್ವಾರದ ದಕ್ಷಪ್ರಜಾಪತಿ ದೇವಾಲಯ, ಡೆಹ್ರಾಡೂನ್ನ ತಪಕೇಶ್ವರ ಮಹಾದೇವ ದೇವಾಲಯ, ಪೌರಿಯ ನೀಲಕಂಠ ದೇವಾಲಯ ಮತ್ತು ಋಷಿಕೇಶದ ಮಹಾದೇವ ದೇವಾಲಯ ಈ ನಿಯಮವನ್ನು ಜಾರಿಗೆ ತರುವ ದೇವಾಲಯಗಳಾಗಿವೆ. ಉತ್ತರ ಭಾರತದ ಯಾವುದೇ ದೇವಾಲಯದಲ್ಲಿ ಇಂತಹ ವಸ್ತ್ರ ಸಂಹಿತೆ ಜಾರಿಯಾಗಿರುವುದು ಇದೇ ಮೊದಲು.