July 9, 2026
Thursday, July 9, 2026
spot_img

ಉಡುಪಿ ಜಿಲ್ಲೆಯಲ್ಲಿ ಅಚ್ಚರಿಯ ವಿದ್ಯಮಾನ: ಊರಿಗೆ ಬಂದ ಜಿಂಕೆಗಳನ್ನಾ ಹೆಬ್ಬಾವು ಹಿಡಿದು ನುಂಗಿತ್ತಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಿಂಕೆಯನ್ನು ನುಂಗಿದ ಭಾರೀ ಗಾತ್ರದ ಹೆಬ್ಬಾವು ಹಾಗೂ ಇನ್ನೊಂದು ಜಿಂಕೆಯನ್ನು ನುಂಗುವ ಯತ್ನದಲ್ಲಿದ್ದ ಹೆಬ್ಬಾವು ಒಂದೇ ಗದ್ದೆಯಲ್ಲಿ ಪತ್ತೆಯಾಗಿ ಆಚಾರಿ ಮೂಡಿಸಿದ ವಿದ್ಯಮಾನ ಉಡುಪಿ ಜಿಲ್ಲೆ ಕುಂದಾಪುರದ ಉಳ್ಳೂರು 74 ಗ್ರಾಮದಲ್ಲಿ ನಡೆದಿದೆ. ವಿಪರ್ಯಾಸವೆಂದರೆ ಎರಡೂ ಜಿಂಕೆ ಕೂಡ ಸಾವನ್ನಪ್ಪಿದೆ.

ಉಳ್ಳೂರು 74 ಗ್ರಾಮದ ಗ್ರಾಮ ಅರಣ್ಯ ಸಮಿತಿಯ ಕಾರ್ಯನಿರ್ವಹಣಾ ಸದಸ್ಯ ಚಿಟ್ಟೆ ರಾಜಗೋಪಾಲ ಹೆಗ್ಡೆ ಅವರ ಗದ್ದೆಯಲ್ಲಿ ಸಂಜೆಯ ವೇಳೆಗೆ ಹೆಬ್ಬಾವೊಂದು ಜಿಂಕೆಯನ್ನು ನುಂಗಿದ್ದು, ಇನ್ನೊಂದು ಹೆಬ್ಬಾವು ಮತ್ತೊಂದು ಜಿಂಕೆಯನ್ನು ನುಂಗುವ ವೇಳೆ ಅಲ್ಲಿದ್ದ ಜನರ ಕಣ್ಣಿಗೆ ಬಿದ್ದಿದೆ.

ಇದನ್ನೂ ಓದಿ:

ಕೂಡಲೇ ಅಲ್ಲಿನ ರೈತರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಆಗಮಿಸಿದ ಶಂಕರನಾರಾಯಣ ವಲಯದ ಫಾರೆಸ್ಟರ್ ಮಂಜುನಾಥ್ ಹಾಗೂ ಬೀಟ್ ಗಾರ್ಡರ್ ದೇವಾನಂದ್ ಸ್ಥಳಕ್ಕೆ ಆಗಮಿಸಿ, ಆ ಹೆಬ್ಬಾವನ್ನು ಜಿಂಕೆಯನ್ನು ರಕ್ಷಣೆ ಮಾಡಲು ಪ್ರಯತ್ನಿಸಿದರೂ, ಅದು ಸಾವನ್ನಪ್ಪಿದೆ. ಇನ್ನು ಜಿಂಕೆ ನುಂಗಿದ ಹೆಬ್ಬಾವನ್ನು ಹಿಡಿದು, ಸ್ಥಳೀಯ ರಿಕ್ಷಾ ಚಾಲಕ- ಮಾಲಕರ ಸಂಘದ ಅಧ್ಯಕ್ಷ ಕೃಷ್ಣ್ಣಮೂರ್ತಿ ಹಾಗೂ ಸ್ಥಳೀಯರ ನೆರವಿನಿಂದ ಕಾಡಿಗೆ ಬಿಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !