ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಕಾನೂನು ಸುಧಾರಣೆ ಬಹುದೊಡ್ಡ ವಿಷಯ. ಹಲವಾರು ಅನಗತ್ಯ ಕಾಯ್ದೆಗಳನ್ನು ಮೋದಿ ಸರ್ಕಾರ ಮೊಟಕುಗೊಳಿಸಿದ್ದರೂ ಇನ್ನೂ ಬದಲಾಗಬೇಕಿರುವುದು ಬಹಳಷ್ಟು. ವಿಶೇಷವಾಗಿ, ಕ್ರಿಮಿನಲ್ ಕಾಯ್ದೆಗಳಲ್ಲಿ ಬದಲಾಗಬೇಕಿರುವುದೇನು ಎಂಬ ಬಗ್ಗೆ ಬಿಜೆಪಿಯ ಕಾನೂನು ಪ್ರಕೋಷ್ಠ ಚಿಂತನ-ಮಂಥನ ನಡೆಸಿ, ಸಲಹೆಗಳನ್ನು ಕ್ರೋಢೀಕರಿಸುತ್ತಿದೆ. ಈ ನಿಟ್ಟಿನಲ್ಲಿ, ವಿಶೇಷವಾಗಿ ಸಾಕ್ಷಿಗಳ ರಕ್ಷಣೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ ನ್ಯಾಯವಾದಿ ವಿವೇಕ ರೆಡ್ಡಿ