ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವ ನಡುವೆಯೇ ಹೊಸ ವಿವಾದಕ್ಕೆ ಸಿಲುಕಿದೆ.
ಹಾಸ್ಯಭರಿತ ದೃಶ್ಯವೊಂದರಲ್ಲಿ ಹಿರಿಯ ಸಂಗೀತ ನಿರ್ದೇಶಕ ಇಳಯರಾಜಾ ಅವರ ಕೃತಿಸ್ವಾಮ್ಯ ಹೋರಾಟವನ್ನು ವ್ಯಂಗ್ಯ ಮಾಡಿದ ಆರೋಪ ಕೇಳಿಬಂದಿದ್ದು, ಅಭಿಮಾನಿಗಳ ಆಕ್ರೋಶದ ಬಳಿಕ ಚಿತ್ರತಂಡ ಸಾರ್ವಜನಿಕವಾಗಿ ಕ್ಷಮೆ ಕೇಳಿದೆ.
ವ್ಯಂಗ್ಯ ಸಂಭಾಷಣೆಗೆ ವಿರೋಧ
ಚಿತ್ರದಲ್ಲಿ ಇಳಯರಾಜಾ ಅವರ ಹಾಡುಗಳನ್ನು ಬಳಸಿದರೆ ದಂಡ ಕಟ್ಟಬೇಕಾಗುತ್ತದೆ ಎಂಬ ಧಾಟಿಯ ಸಂಭಾಷಣೆ ಇತ್ತು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಸಂಗೀತ ನಿರ್ದೇಶಕರ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಚಿತ್ರತಂಡದ ಕ್ಷಮಾಪಣೆ
ವಿವಾದ ಹೆಚ್ಚಾಗುತ್ತಿದ್ದಂತೆ ನಿರ್ದೇಶಕ ಬಾಲಾಜಿ ಹಾಗೂ ನಿರ್ಮಾಪಕರು ಪ್ರಕಟಣೆ ಹೊರಡಿಸಿ, ಯಾರನ್ನೂ ಅವಮಾನಿಸುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಇಳಯರಾಜಾ ಭಾರತೀಯ ಚಿತ್ರರಂಗದ ದಂತಕಥೆ ಎಂದು ಹೇಳಿದ ಅವರು, ನೋವುಂಟಾಗಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದ್ದಾರೆ.
ದೃಶ್ಯ ತೆಗೆಯಲು ನಿರ್ಧಾರ
ವಿವಾದಿತ ದೃಶ್ಯವನ್ನು ಸಿನಿಮಾದಿಂದ ತೆಗೆದುಹಾಕುವುದಾಗಿ ಚಿತ್ರತಂಡ ಘೋಷಿಸಿದೆ. ತ್ರಿಷಾ ನಟಿಸಿರುವ ಈ ಸಿನಿಮಾ ಸೂರ್ಯಗೆ ಮತ್ತೆ ಯಶಸ್ಸಿನ ಹಾದಿ ತೋರಿಸಿದ್ದು, ಈಗ ವಿವಾದದ ನಡುವೆಯೂ ಉತ್ತಮ ಪ್ರದರ್ಶನ ಮುಂದುವರಿಸಿದೆ.



