ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರು ಒಂದೇ ಒಂದು ಬೇಸಿಗೆ ಮಳೆಗೆ ನೆಂದು ತೊಪ್ಪೆಯಾಗಿ ಮಲೆನಾಡಿನಂತೆ ಕಾಣಿಸುತ್ತಿದೆ. ಹಲವರು ತಣ್ಣಗಿನ ಮಳೆ, ಗಾಳಿಯನ್ನು ಎಂಜಾಯ್ ಮಾಡುತ್ತಾ ನೆಮ್ಮದಿಯ ನಿದ್ದೆ ಮಾಡಿದ್ದಾರೆ. ಆದರೆ ಕೆಲವರಿಗೆ ನಿನ್ನೆ ದುರಂತದ ದಿನವಾಗಿದೆ. ಒಂದೇ ದಿನದಲ್ಲಿ ಹತ್ತು ಮಂದಿ ಮೃತಪಟ್ಟಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ.
ಬೆಂಗಳೂರಿನ ರಸ್ತೆಗಳಲ್ಲಿ ಮರಗಳು ಉರುಳಿವೆ, ಅಂಡರ್ಪಾಸ್ಗಳಲ್ಲಿ ನೀರು ನಿಂತಿದ್ದು, ಓಡಾಟಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಬೆಂಗಳೂರು ಸಂಚಾರ ಪೊಲೀಸರು ಯಾವ ರಸ್ತೆಗಳಲ್ಲಿ ಓಡಾಟ ಬೇಡ ಎಂದು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪೊಲೀಸರು ಮೂರು ಟ್ವೀಟ್ ಮಾಡಿದ್ದು, ಇಲ್ಲಿ ಯಾವ ರಸ್ತೆಗಳಲ್ಲಿ ಓಡಾಟ ಬೇಡ ಎಂದು ಸಲಹೆ ನೀಡಿದ್ದಾರೆ.



